ನಿನಗೂ ಕೋಪವೇ ಬಡವರ ಮೇಲೆ,
ಪಟ-ಪಟ ಸುರಿಯುವೆ ಮಳೆರಾಯ.
ಧಾನ್ಯವ ಕೊಚ್ಚಿ, ಮನುಜರ ಚಚ್ಚಿ,
ಎಲ್ಲಿಗೆ ಹೋಗುವೆ ಜವರಾಯ?
ಕೋಗಿಲೆ ಕಂಠ ಮಧುರವು ನಿನಗೆ,
ರೈತನ ಕೂಗು ಕೇಳಿಸದೆ?
ರಂಭೆ ಊರ್ವಶಿ ಕಾದಿಹರಲ್ಲಿ,
ಬೇಗನೆ ಹೋಗೋ ಮಾರಾಯ.
ಎಲ್ಲರ ನಡುಗಿಸಿ, ಅಹಂ ಹುದುಗಿಸಿ,
ಧರೆಯನು ಸೇರಲು ಬಂದಿಹೆಯ?
ಸಾಗರ ಕಾಣುವ ತವಕದಿ ನೀನು,
ಪ್ರೀತಿಯ ಕಡಲನು ತಂದಿಹೆಯ?
ಹಿಂದೂ ಮುಸ್ಲಿಂ ಕ್ರೈಸ್ತರು ಎನ್ನದೆ,
ಎಲ್ಲರ ಮೈಲಿಗೆ ಕಳೆದಿರುವೆ.
ಕನ್ನಡ ತಮೀಳು ತೆಲುಗು ಎನ್ನದೆ,
ಎಲ್ಲರ ಮನೆಯ ತೊಳೆದಿರುವೆ,
ಹೇಳು ಎಲ್ಲಿಗೆ ನೀನು ಹೊರೆಟಿರುವೆ?

No comments:
Post a Comment
ನಿಮ್ಮ ಪ್ರೋತ್ಸಾಹ,
ನನಗೆ ತರುವುದು ಉತ್ಸಾಹ.